ಬೆಳಿಗ್ಗೆ ಐದು ಗಂಟೆಗೆ ಇಡೀ ಶಿರಡಿಹಳ್ಳಿಗೆ ಎಚ್ಚರವಾಗುತ್ತಿತ್ತು. ಆದರೆ, ಆ ಎಚ್ಚರ ಗಂಟೆಯ ಸದ್ದು ಕೇಳಿ ಅಲ್ಲ. ಊರ ಮಧ್ಯದಲ್ಲಿದ್ದ 'ಧರ್ಮಸಂಕೇತ' ಸಮುದಾಯ ಕೇಂದ್ರದ ಬಾಗಿಲುಗಳು ತೆರೆದ ಶಬ್ದವೂ ಅಲ್ಲ. ಏಕೆಂದರೆ, ಆ ಕೇಂದ್ರಕ್ಕೆ ಬಾಗಿಲುಗಳೇ ಇರಲಿಲ್ಲ. ಕೇಂದ್ರದ ಮುಂಭಾಗ ಕೇವಲ ತೆರೆದ ಮಂಟಪದಂತಿತ್ತು. ಮರದ ಸುಂದರ ಕೆತ್ತನೆಗಳಿದ್ದ ಚೌಕಟ್ಟುಗಳು ಮಾತ್ರ ಇದ್ದು, ಅವುಗಳ ಮೇಲೆ ಬಾಗಿಲುಗಳನ್ನು ಅಳವಡಿಸಲು ಬೇಕಾದ ಕುರುಹುಗಳಿರಲಿಲ್ಲ. ಒಳಗಡೆ, ಮೂವತ್ತು ಜನರು ಕುಳಿತು ಪ್ರವಚನ ಕೇಳಬಹುದಾದಷ್ಟು ಜಾಗ. ಮೂಲೆಯಲ್ಲಿ ಹಿತ್ತಾಳೆಯ ಪೆಟ್ಟಿಗೆಯಲ್ಲಿ ಊರವರ ದೇಣಿಗೆ ಹಣ, ಮತ್ತು ಅದರ ಪಕ್ಕದಲ್ಲಿ ಒಂದು ಪುರಾತನ ತಾಳೆಗರಿಯ ಗ್ರಂಥ. ಇವೆರಡೂ ಬಲು ಬೆಲೆಬಾಳುವ ವಸ್ತುಗಳು. ಆದರೂ, ಅವುಗಳ ರಕ್ಷಣೆಗೆ ಕಾವಲುಗಾರನಿಲ್ಲ, ಸರಪಳಿಯಿಲ್ಲ, ಚಿಲಕದ ಸುಳಿವೂ ಇರಲಿಲ್ಲ. ಆ ದಿನ, ಊರಿನ ಹಿರಿಯರೂ ಮತ್ತು ಕೇಂದ್ರದ ಧರ್ಮದರ್ಶಿಗಳೂ ಆದ ತಿಮ್ಮಣ್ಣಯ್ಯ ಅವರು, ತಮ್ಮ ಮೊಮ್ಮಗ ವಿಶ್ವಾಸ್ ನನ್ನು ಕರೆದು ತರುತ್ತಾರೆ. ವಿಶ್ವಾಸ್ಗೆ ಆಗ ಕೇವಲ ಎಂಟು ವರ್ಷ.
ತಟಸ್ಥ ಬಿಂದು - 1
ಬೆಳಿಗ್ಗೆ ಐದು ಗಂಟೆಗೆ ಇಡೀ ಶಿರಡಿಹಳ್ಳಿಗೆ ಎಚ್ಚರವಾಗುತ್ತಿತ್ತು. ಆದರೆ, ಆ ಎಚ್ಚರ ಗಂಟೆಯ ಸದ್ದು ಕೇಳಿ ಅಲ್ಲ. ಊರ ಮಧ್ಯದಲ್ಲಿದ್ದ 'ಧರ್ಮಸಂಕೇತ' ಸಮುದಾಯ ಕೇಂದ್ರದ ಬಾಗಿಲುಗಳು ಶಬ್ದವೂ ಅಲ್ಲ. ಏಕೆಂದರೆ, ಆ ಕೇಂದ್ರಕ್ಕೆ ಬಾಗಿಲುಗಳೇ ಇರಲಿಲ್ಲ.ಕೇಂದ್ರದ ಮುಂಭಾಗ ಕೇವಲ ತೆರೆದ ಮಂಟಪದಂತಿತ್ತು. ಮರದ ಸುಂದರ ಕೆತ್ತನೆಗಳಿದ್ದ ಚೌಕಟ್ಟುಗಳು ಮಾತ್ರ ಇದ್ದು, ಅವುಗಳ ಮೇಲೆ ಬಾಗಿಲುಗಳನ್ನು ಅಳವಡಿಸಲು ಬೇಕಾದ ಕುರುಹುಗಳಿರಲಿಲ್ಲ. ಒಳಗಡೆ, ಮೂವತ್ತು ಜನರು ಕುಳಿತು ಪ್ರವಚನ ಕೇಳಬಹುದಾದಷ್ಟು ಜಾಗ. ಮೂಲೆಯಲ್ಲಿ ಹಿತ್ತಾಳೆಯ ಪೆಟ್ಟಿಗೆಯಲ್ಲಿ ಊರವರ ದೇಣಿಗೆ ಹಣ, ಮತ್ತು ಅದರ ಪಕ್ಕದಲ್ಲಿ ಒಂದು ಪುರಾತನ ತಾಳೆಗರಿಯ ಗ್ರಂಥ. ಇವೆರಡೂ ಬಲು ಬೆಲೆಬಾಳುವ ವಸ್ತುಗಳು. ಆದರೂ, ಅವುಗಳ ರಕ್ಷಣೆಗೆ ಕಾವಲುಗಾರನಿಲ್ಲ, ಸರಪಳಿಯಿಲ್ಲ, ಚಿಲಕದ ಸುಳಿವೂ ಇರಲಿಲ್ಲ.ಆ ದಿನ, ಊರಿನ ಹಿರಿಯರೂ ಮತ್ತು ಕೇಂದ್ರದ ಧರ್ಮದರ್ಶಿಗಳೂ ಆದ ತಿಮ್ಮಣ್ಣಯ್ಯ ಅವರು, ತಮ್ಮ ಮೊಮ್ಮಗ ವಿಶ್ವಾಸ್ ನನ್ನು ಕರೆದು ತರುತ್ತಾರೆ. ವಿಶ್ವಾಸ್ಗೆ ಆಗ ಕೇವಲ ಎಂಟು ವರ್ಷ.ತಿಮ್ಮಣ್ಣಯ್ಯ ಮೊಮ್ಮಗನಿಗೆ ಸಮುದಾಯ ಕೇಂದ್ರದ ಸುತ್ತ ಕೈತೋರಿಸುತ್ತಾ ...Read More
ತಟಸ್ಥ ಬಿಂದು - 2
ಕಳುವಾದ ಎರಡು ದಿನಗಳ ನಂತರವೂ ಶಿರಡಿಹಳ್ಳಿಯಲ್ಲಿ ಯಾವುದೇ ಕೋಲಾಹಲವಿರಲಿಲ್ಲ. ಬದಲಿಗೆ, ಒಂದು ಬಗೆಯ ಭಾರವಾದ ಮೌನ ಆವರಿಸಿತ್ತು. ಊರ ಜನರಿಗೆ ಕಳ್ಳ ಸಿಗದಿರುವ ಆತಂಕಕ್ಕಿಂತ, ಇನ್ನು ನಂಬಿಕೆಯೂ ಅನ್ಯರಂತೆ ದುರ್ಬಲವಾಯಿತೇ? ಎಂಬ ಸಂಕಟ ಹೆಚ್ಚು ಕಾಡುತ್ತಿತ್ತು. ಕಳ್ಳ ಸಿಕ್ಕಿದ್ದರೆ, ಅವನನ್ನು ಶಿಕ್ಷಿಸಿ ಮತ್ತೆ ನಂಬಿಕೆ ಗಳಿಸಬಹುದಿತ್ತು. ಆದರೆ ಕಳ್ಳ ಸಿಗದಿರುವುದು, ಪ್ರತಿಯೊಬ್ಬರ ಮೇಲೂ, ಸ್ವತಃ ತಮ್ಮ ಮೇಲೂ ಸೂಕ್ಷ್ಮ ಅನುಮಾನ ಹುಟ್ಟಿಸಿತ್ತು. ತಿಮ್ಮಣ್ಣಯ್ಯನವರೂ ಈ ಮೌನವನ್ನು ಗಮನಿಸಿದರು. ಅವರು ತಮ್ಮ ಮೊಮ್ಮಗ ವಿಶ್ವಾಸ್ನಿಗೆ ತಾಳೆಗರಿಯ ಗ್ರಂಥವನ್ನು ಓದಲು ಹೇಳಿ, ತಮ್ಮ ಹಳೆಯ ದಿನಚರಿಯ ಪುಟಗಳನ್ನು ತೆಗೆದುಕೊಂಡು ಕೇಂದ್ರದ ಮುಂದೆ ಕುಳಿತರು.ಅಜ್ಜ, ವಿಶ್ವಾಸ್ ಕೇಳಿದ, ಆ ಚಿನ್ನದ ಚೀಲವನ್ನು ನಿಜವಾಗಿಯೂ ಆ ಸಾಧುವೇ ಕದ್ದಿರಬಹುದೇ?ತಿಮ್ಮಣ್ಣಯ್ಯ: ಇಲ್ಲ ವಿಶ್ವಾಸ್. ಸಾಧು ಕದ್ದಿದ್ದರೆ, ಅವನಿಗೆ ಪಾಪದ ಭಯ ಇರಲಿಲ್ಲ. ಪಾಪದ ಭಯವಿಲ್ಲದವನು ಸಾಧುವಾಗುವುದಿಲ್ಲ. ಸಾಧು ಹಣವನ್ನು ಪ್ರೀತಿಸಲಾರ.ವಿಶ್ವಾಸ್: ಹಾಗಾದರೆ ಆ ರೈತ, ಗಣೇಶಪ್ಪ, ಅಥವಾ ಶಿವಣ್ಣ... ಯಾರಾದರೂ...?ತಿಮ್ಮಣ್ಣಯ್ಯ: ಕಳ್ಳ ಯಾರೇ ಆಗಿರಲಿ. ನಷ್ಟದ ಬೆಲೆ ...Read More
ತಟಸ್ಥ ಬಿಂದು - 3
ಗಣೇಶಪ್ಪನವರ ಆಘಾತಕಾರಿ ತಪ್ಪೊಪ್ಪಿಗೆಯ ನಂತರ ಮತ್ತು ಚಿಲಕದ ವೈಫಲ್ಯದ ನಂತರ, ಊರಿನ ಹಿರಿಯರೆಲ್ಲಾ ಸೇರಿ ಒಂದು ನಿರ್ಣಾಯಕ ಸಭೆ ನಡೆಸಿದರು. ನಂಬಿಕೆಯು ಸತ್ತಿದೆ ಎಂದು ಒಪ್ಪಿಕೊಳ್ಳಲು ಸತ್ಯವನ್ನು ಒಪ್ಪಿಕೊಳ್ಳುವುದು ಅನಿವಾರ್ಯವಾಗಿತ್ತು. ಧರ್ಮಸಂಕೇತ' ಕೇಂದ್ರವು ತನ್ನ ಮೂಲ ಉದ್ದೇಶವನ್ನು ಕಳೆದುಕೊಂಡಿತು. ಗಣೇಶಪ್ಪನವರ ಪ್ರಭಾವದಿಂದ ಮತ್ತು ಬೀಗದ ಮೇಲೆ ಬೆಳೆದ ಭ್ರಮೆಯಿಂದ, ಸಮುದಾಯ ಕೇಂದ್ರವನ್ನು ಸಂಪೂರ್ಣವಾಗಿ ನವೀಕರಿಸಲು ನಿರ್ಧರಿಸಲಾಯಿತು. ಹಳೆಯ ತೆರೆದ ಮಂಟಪವನ್ನು ಕೆಡವಿ, ಅಲ್ಲಿ ಬಲಿಷ್ಠವಾದ ಬಾಗಿಲುಗಳು ಮತ್ತು ಗ್ರಾಮೀಣ ಬ್ಯಾಂಕ್ ಶಾಖೆಯನ್ನು ಸ್ಥಾಪಿಸಲು ತೀರ್ಮಾನಿಸಲಾಯಿತು.ವಿಶ್ವಾಸ್ ಈ ನಿರ್ಧಾರವನ್ನು ಮನಸ್ಸಿಲ್ಲದಿದ್ದರೂ ಒಪ್ಪಿಕೊಂಡರು. ಅವರ ಅಭಿಪ್ರಾಯದಲ್ಲಿ, ಬೀಗ ಹಾಕುವುದು ಕೇವಲ ಕಳ್ಳರಿಗಲ್ಲ, ನಮ್ಮದೇ ಭವಿಷ್ಯಕ್ಕೆ ನಾವು ಹಾಕುವ ಬೀಗ. ಕೇಂದ್ರದ ಹಳೆಯ ಮರದ ಚೌಕಟ್ಟಿನ ಜಾಗದಲ್ಲಿ ದಪ್ಪ ಕಾಂಕ್ರೀಟ್ ಗೋಡೆಗಳು ಎದ್ದವು. ಬಾಗಿಲುಗಳು ಇನ್ನು ಮುಂದೆ ಮರದ್ದಾಗಿರಲಿಲ್ಲ. ಅವು ಕಬ್ಬಿಣದವು ಪ್ರವಚನ ನಡೆಯುತ್ತಿದ್ದ ಜಾಗದಲ್ಲಿ ಖಜಾನೆ ಕೋಣೆ ನಿರ್ಮಾಣವಾಯಿತು.ಗಣೇಶಪ್ಪನೇ ಈ ಹೊಸ ಬ್ಯಾಂಕಿನ ಮೇಲ್ವಿಚಾರಣೆಯನ್ನು ವಹಿಸಿಕೊಂಡರು ಮತ್ತು ಅದಕ್ಕೆ ಭದ್ರ ಕೋಟೆ ...Read More
ತಟಸ್ಥ ಬಿಂದು - 4
ಬೆಳಿಗ್ಗೆ ಬ್ಯಾಂಕ್ ತೆರೆಯುವಾಗ ಕಂಡ ದೃಶ್ಯ ಅತ್ಯಂತ ಆಘಾತಕಾರಿಯಾಗಿತ್ತು. ಮುಖ್ಯ ಖಜಾನೆ ಕೋಣೆಯ ಬೀಗಗಳು ಇನ್ನೂ ಭದ್ರವಾಗಿಯೇ ಇದ್ದವು, ಆದರೆ ಹಿಂದೆ ಗಣೇಶಪ್ಪ ತ್ಯಾಜ್ಯ ತೆಗೆಯುವ ಎಂದು ನಿರ್ಲಕ್ಷಿಸಿದ್ದ ಸಣ್ಣ ಬಾಗಿಲು ಮುರಿದು ಹೋಗಿತ್ತು. ಕಳ್ಳರು ಮುಖ್ಯ ಬೀಗಗಳನ್ನು ಮುರಿಯುವ ಕಷ್ಟವನ್ನು ತೆಗೆದುಕೊಳ್ಳದೆ, ದುರ್ಬಲ ಬಿಂದುವಿನ ಮೂಲಕ ಪ್ರವೇಶಿಸಿದ್ದರು. ಖಜಾನೆಯಿಂದ ನಗದು ಕಳುವಾಗಿರಲಿಲ್ಲ, ಆದರೆ ಹಲವಾರು ಪ್ರಮುಖ ದಾಖಲೆಗಳು ಮತ್ತು ಗ್ರಾಹಕರ ವೈಯಕ್ತಿಕ ಮಾಹಿತಿ ಮಾಯವಾಗಿತ್ತು. ಕಳ್ಳರು ಸಂಪತ್ತಿಗಿಂತ ಗೌಪ್ಯತೆಯನ್ನು ಗುರಿಯಾಗಿಸಿಕೊಂಡಿದ್ದರು.ಗಣೇಶಪ್ಪ ಮತ್ತು ರಾಜಪ್ಪ (ಇನ್ನೂ ಅಮಾನತಿನಲ್ಲಿದ್ದರೂ) ಸ್ಥಳಕ್ಕೆ ಧಾವಿಸಿದರು. ಇಬ್ಬರೂ ಬಲಿಷ್ಠ ಬೀಗಗಳನ್ನು ದಿಟ್ಟಿಸಿ ನೋಡಿದರು. ಬೀಗಗಳ ಮೇಲಿನ ಅವರ ಸಂಪೂರ್ಣ ಅವಲಂಬನೆ ಹೀಗೆ ಹಾಸ್ಯಾಸ್ಪದವಾಗಿ ವಿಫಲವಾಗಿತ್ತು.ಕಾವಲುಗಾರ ಕೃಷ್ಣಪ್ಪ ಸಂಪೂರ್ಣ ಕುಸಿದುಹೋಗಿದ್ದ. ಅವನ ನಿಷ್ಠೆ ಮತ್ತು ಜವಾಬ್ದಾರಿ ಇಡೀ ರಾತ್ರಿ ಮುಖ್ಯ ದ್ವಾರದಲ್ಲಿದ್ದವು.ಗಣೇಶಪ್ಪ ಕೋಪದಿಂದ ಕೃಷ್ಣಪ್ಪನ ಮೇಲೆ ಕೆರಳಿ, ಕೃಷ್ಣಪ್ಪ, ನೀನು ರಾತ್ರಿ ಕಾವಲಿದ್ದದ್ದು ನಿಜವೋ ಸುಳ್ಳೋ? ಆ ಸಣ್ಣ ಬಾಗಿಲು ಮುರಿದಿದ್ದು ಹೇಗೆ ನಿನ್ನ ಕಣ್ಣಿಗೆ ಬೀಳಲಿಲ್ಲ?ಕೃಷ್ಣಪ್ಪ ...Read More
ತಟಸ್ಥ ಬಿಂದು - 5
ವರ್ಷಗಳು ಉರುಳಿವೆ. ಹಳೇ 'ಭದ್ರ ಕೋಟೆ' ಬ್ಯಾಂಕಿನ ಕಟ್ಟಡ ಈಗ ಹಳೆಯದಾಗಿದೆ. ಆದರೆ ಅದರ ಪಕ್ಕದಲ್ಲಿ, ಹೊಳೆಯುವ ಗಾಜಿನ ಗೋಡೆಗಳುಳ್ಳ ಹೊಸ ಟೆಕ್-ಕಟ್ಟಡವೊಂದು ತಲೆಯೆತ್ತಿದೆ. ಅದರ ತಟಸ್ಥ ಬಿಂದು' (The Neutral Point) ಸಾಫ್ಟ್ವೇರ್ ಮತ್ತು ಸರ್ವೆಲೆನ್ಸ್ ಸೊಲ್ಯೂಷನ್ಸ್.ಕೃಷ್ಣಪ್ಪನ ಮೊಮ್ಮಗಳು, ಈಗ 30ರ ಹರೆಯದ ತಂತ್ರಜ್ಞೆ ಅನುಷಾ, ಈ ಕಂಪನಿಯ ಮುಖ್ಯಸ್ಥೆ. ಅವಳ ಅಜ್ಜ ಕೃಷ್ಣಪ್ಪ ಬೀಗಗಳ ಮೇಲೆ ಇಟ್ಟ ನಂಬಿಕೆಯಿಂದಾಗಿ ಕೆಲಸ ಕಳೆದುಕೊಂಡಿದ್ದರು. ಅನುಷಾಳ ದೃಷ್ಟಿಯಲ್ಲಿ, ಭಾವನೆಗಳು ಮತ್ತು ನಂಬಿಕೆಗಳು ಎಂದಿಗೂ ವಿಶ್ವಾಸಾರ್ಹವಲ್ಲ.ತಂತ್ರಜ್ಞಾನ ಮತ್ತು ಡೇಟಾ ಮಾತ್ರ ಸತ್ಯ.ಅನುಷಾಳ ಕಂಪನಿಯ ಮುಖ್ಯ ಕೆಲಸ ಯಾವುದೇ ಮಾನವೀಯ ಪಕ್ಷಪಾತವಿಲ್ಲದೆ ಸತ್ಯವನ್ನು ಮಾತ್ರ ದಾಖಲಿಸುವ ಅತ್ಯಾಧುನಿಕ CCTV ಮತ್ತು AI ಆಧಾರಿತ ಕಣ್ಗಾವಲು ವ್ಯವಸ್ಥೆಗಳನ್ನು ವಿನ್ಯಾಸಗೊಳಿಸುವುದು. ಅವರ ಪ್ರಮುಖ ಗ್ರಾಹಕರು ಹಳೇ ಬ್ಯಾಂಕ್ ಮತ್ತು ಹಳ್ಳಿಯ ದೇವಸ್ಥಾನ (ಹಿಂದಿನ 'ಧರ್ಮಸಂಕೇತ' ಕೇಂದ್ರದ ಸ್ಥಳದಲ್ಲಿ ನಿರ್ಮಿಸಿದ್ದು).ಅನುಷಾಳ ಕಚೇರಿಯ ಮಧ್ಯದಲ್ಲಿ ದೊಡ್ಡ ಗೋಡೆಯೊಂದರ ಮೇಲೆ ನೂರಾರು ಚಿಕ್ಕ ಪರದೆಗಳು ಮಿನುಗುತ್ತಿದ್ದವು. ಪ್ರತಿ ಪರದೆಯೂ ಶಿರಡಿಹಳ್ಳಿ ...Read More