Missing girlfriend - 4 in Kannada Love Stories by Danger Writer books and stories PDF | ಕಾಣದ ಗರ್ಲ್ ಫ್ರೆಂಡ್ - 4

Featured Books
  • ویرانی

    تنہائی   خالی پن کو گلے لگانا سیکھیں۔ تنہائی کو دور کرن...

  • رشتے کی ڈور

    رشتے کی ڈورزندگی میں کچھ رشتے صرف خون کے رشتے نہیں ہوتے۔وہ م...

  • فرصت کے لمحات

    کہاں جا رہے ہو؟ کیا آپ کو سکون مل رہا ہے؟   کس کی یاد م...

  • نیم بسمل

    حرف آغاز بِسْمِ اللَّهِ الرَّحْمَنِ الرَّحِيمِجب درخت سے آخر...

  • शायद उसी दिन मैं मर गया

    शायद उसी दिन मैं मर गयालगता है जैसे मेरा सपना मुकम्मल हो गया...

Categories
Share

ಕಾಣದ ಗರ್ಲ್ ಫ್ರೆಂಡ್ - 4

​ಪ್ರಿಯಾ ಜೊತೆಗಿನ ಮಾತುಕತೆಯ ನಂತರ ಕೃಷ್ಣನ ಮನಸ್ಸಿನಲ್ಲಿ ಅನುಳ ಮೇಲಿನ ನಂಬಿಕೆ ಇನ್ನಷ್ಟು ಗಟ್ಟಿಯಾಗಿತ್ತು, ಆದರೆ ಅದೇ ಸಮಯದಲ್ಲಿ ಅನುಳ ಅಣ್ಣನ ಮೇಲೆ ಅನುಮಾನ ಹೆಚ್ಚಾಗಿತ್ತು. ಆತ ಲೋಫರ್ ಆಗಿದ್ದರೆ, ಆತನ ಉದ್ದೇಶ ಖಂಡಿತವಾಗಿಯೂ ಶುದ್ಧವಾಗಿರಲು ಸಾಧ್ಯವಿಲ್ಲ. ಅನುಳ ಗಂಡನ ಸಾವಿನ ಹಿಂದೆ ಆತನೇ ಇರಬಹುದೆಂಬ ಭಯ ಅವನನ್ನು ಕಾಡುತ್ತಿತ್ತು. ಈ ರಹಸ್ಯದ ಸುಳಿವು ಪತ್ತೆಹಚ್ಚಲು ಅವನು ನಿರ್ಧರಿಸಿದ.

​ಅನುಳ ಕಥೆಯ ಪ್ರಕಾರ, ಅವಳ ಅಣ್ಣ ತನ್ನ ದುಡ್ಡಿನ ಆಸೆಗೆ ಅವಳನ್ನು ಒಂದು ಶ್ರೀಮಂತನ ಮಗನ ಜೊತೆ ಮದುವೆ ಮಾಡಿಸಿದ್ದ. ಮದುವೆಯಾಗಿ ಎರಡು ತಿಂಗಳಲ್ಲಿ ಆತ ಅಪಘಾತದಲ್ಲಿ ಮೃತಪಟ್ಟಿದ್ದ. ಈ ವಿಷಯದ ಬಗ್ಗೆ ತಿಳಿದುಕೊಳ್ಳಲು ಕೃಷ್ಣ ಕೆಲವು ಆನ್‌ಲೈನ್ ಸುದ್ದಿ ಪೋರ್ಟಲ್‌ಗಳು ಮತ್ತು ಸಾಮಾಜಿಕ ಮಾಧ್ಯಮಗಳನ್ನು ಹುಡುಕಲು ಶುರುಮಾಡಿದ. ಅನುಳ ಗಂಡನ ಹೆಸರು ಅವನಿಗೆ ಗೊತ್ತಿಲ್ಲದಿದ್ದರೂ, ಅವನ ತಂದೆಯ ವೃತ್ತಿ ಮತ್ತು ಅವರು ಇರುವ ನಗರದ ಬಗ್ಗೆ ಅನು ಅವನಿಗೆ ಕೆಲವು ಸುಳಿವುಗಳನ್ನು ನೀಡಿದ್ದಳು.​ಅವನು ಬೆಂಗಳೂರಿನ ಶ್ರೀಮಂತ ವ್ಯಾಪಾರಿಗಳು ಎಂದು ಹುಡುಕಿದ. ಕೆಲವು ಹೆಸರುಗಳು ಮತ್ತು ಅವರ ವ್ಯವಹಾರಗಳ ವಿವರಗಳು ಸಿಕ್ಕವು. ಇದೇ ಸಮಯದಲ್ಲಿ, ಬೆಂಗಳೂರು ಅಪಘಾತ ಸಾವು ಎಂದು ಹುಡುಕಿದಾಗ ಕೆಲವು ವರದಿಗಳು ಸಿಕ್ಕವು. ಒಂದು ವರದಿಯಲ್ಲಿ, ಒಬ್ಬ ಶ್ರೀಮಂತ ವ್ಯಾಪಾರಿಯ ಮಗ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಪೋಲೀಸರು ಈ ಘಟನೆಗೆ ಯಾರು ಕಾರಣ ಎಂದು ತನಿಖೆ ಮಾಡುತ್ತಿದ್ದಾರೆ ಎಂದು ಬರೆಯಲಾಗಿತ್ತು. ಈ ವರದಿಯೊಂದಿಗೆ ಅವನ ಫೋಟೋ ಕೂಡ ಇತ್ತು. ಫೋಟೋ ನೋಡಿ ಅವನಿಗೆ ಒಂದು ಕ್ಷಣ ಆಘಾತವಾಯಿತು. ಅನು ಹೇಳಿದ ಹುಡುಗ ಯಾರೆಂದು ಅವನಿಗೆ ಗೊತ್ತಾಯಿತು. ಆದರೆ ಆತ ಅಪಘಾತದಲ್ಲಿ ಸತ್ತನೋ ಅಥವಾ ಅವನ ಅಣ್ಣ ಅವನನ್ನು ಕೊಂದಿದ್ದಾನೋ ಗೊತ್ತಾಗಲಿಲ್ಲ.​ಅವನ ಮನಸ್ಸಿನಲ್ಲಿ ಒಂದು ಅಸ್ಪಷ್ಟ ಭಯ ಕಾಡುತ್ತಿತ್ತು. ಅನುಳ ಅಣ್ಣ ನಿಜವಾಗಿಯೂ ಒಬ್ಬ ಲೋಫರ್ ಆಗಿದ್ದರೆ, ಆತ ತನ್ನ ಸ್ವಾರ್ಥಕ್ಕಾಗಿ ಯಾವುದೇ ಗಂಭೀರ ಅಪರಾಧವನ್ನು ಮಾಡಬಹುದಿತ್ತು. ಅನುಳ ಮಾತುಗಳಲ್ಲಿ ಇದ್ದ ದುಃಖ ನನ್ನ ಹೃದಯಕ್ಕೆ ಹತ್ತಿರವಾಗಿತ್ತು. ಆದರೆ ಆಕೆಯ ದುರಂತ ಕಥೆಗೆ ಅವಳ ಅಣ್ಣನೇ ಮುಖ್ಯ ಕಾರಣವಾಗಿರುವ ಸಾಧ್ಯತೆ ಇದೆ ಎಂದು ಅವನಿಗೆ ಅನಿಸಿತು.ಇದೇ ಸಮಯದಲ್ಲಿ, ಅವನಿಗೆ ಪ್ರಿಯಾಳ ಮೆಸೇಜ್ ಬಂತು, "ಕೃಷ್ಣ, ನಾನು ಒಂದು ವಾರದಲ್ಲಿ ಬೆಂಗಳೂರಿಗೆ ಹೋಗಬೇಕು. ನಾನು ಅಲ್ಲಿರುವಾಗ ಅನುಳನ್ನು ಭೇಟಿ ಮಾಡಿ ನಿನ್ನ ಬಗ್ಗೆ ಮಾತಾಡುತ್ತೇನೆ. ಅಲ್ಲಿ ನಾನು ಅವಳ ಅಣ್ಣನ ಬಗ್ಗೆ ಇನ್ನಷ್ಟು ವಿಷಯಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತೇನೆ. ನೀನು ಸ್ವಲ್ಪ ತಾಳ್ಮೆಯಿಂದ ಇರು" ಎಂದು ಹೇಳಿದಳು.ಅವನ ಆಸೆಗೆ ಬಲ ಬಂತು. ಪ್ರಿಯಾ ಖಂಡಿತವಾಗಿ ನನಗೆ ಸಹಾಯ ಮಾಡುತ್ತಾಳೆಂದು ಅವನಿಗೆ ವಿಶ್ವಾಸವಿತ್ತು. ಆದರೆ ಅವಳಿಂದ ಸಿಗುವ ಮಾಹಿತಿ ಅಷ್ಟೇ ಮುಖ್ಯವಾಗಿತ್ತು. ಈ ಕಥೆಯು ಕೇವಲ ಪ್ರೀತಿಯ ಕಥೆಯಾಗಿರದೆ, ಅದರಲ್ಲಿ ಒಂದು ರಹಸ್ಯದ ಜಾಡು ಇದೆ ಎಂದು ಅವನಿಗೆ ಅರಿವಾಯಿತು. ಈ ನಿಗೂಢತೆಯನ್ನು ಬೇಧಿಸಬೇಕೆಂದು ನಿರ್ಧರಿಸಿದ.

​ಪ್ರಿಯಾ ಬೆಂಗಳೂರಿಗೆ ಹೋದ ನಂತರ ಕೃಷ್ಣನ ಮನಸ್ಸಿನಲ್ಲಿ ಕುತೂಹಲ ಹೆಚ್ಚಾಗಿತ್ತು. ಅವನು ಅವಳ ಮೆಸೇಜ್‌ಗಾಗಿ ಕಾದು ಕುಳಿತಿದ್ದ. ಎರಡು ದಿನಗಳ ನಂತರ, ಪ್ರಿಯಾ ಅವನಿಗೆ ಮೆಸೇಜ್ ಮಾಡಿದಳು. ಕೃಷ್ಣ, ನಾನು ಅನುಳನ್ನು ಭೇಟಿ ಮಾಡಿದ್ದೇನೆ. ಈ ಮೆಸೇಜ್ ಅವನ ಹೃದಯ ಬಡಿತವನ್ನು ಹೆಚ್ಚಿಸಿತು.ಹೇಳು ಪ್ರಿಯಾ, ಏನು ನಡೆಯಿತು? ಅನು ಹೇಗಿದ್ದಾಳೆ? ಆಕೆಯ ಗಂಡನ ಸಾವಿನ ಬಗ್ಗೆ ಏನು ಗೊತ್ತಾಯಿತು?" ಎಂದು ಅವನು ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳಿದ.ಕೃಷ್ಣ, ನಿಧಾನವಾಗಿರು. ನಾನು ನಿನಗೆ ಎಲ್ಲವನ್ನೂ ಹೇಳುತ್ತೇನೆ ಎಂದು ಹೇಳಿ, ಪ್ರಿಯಾ ಬೆಂಗಳೂರಿನಲ್ಲಿ ನಡೆದ ಘಟನೆಗಳನ್ನು ವಿವರಿಸಿದಳು.

​ಪ್ರಿಯಾ ಅನುಳನ್ನು ಭೇಟಿ ಮಾಡಿದಾಗ, ಅನುಳ ಮನೆಯ ವಾತಾವರಣ ತುಂಬಾ ದುಃಖಕರವಾಗಿತ್ತು. ಅವಳ ತಾಯಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು, ಮತ್ತು ಅವಳ ಅಣ್ಣನ ವರ್ತನೆ ಇನ್ನೂ ಕೆಟ್ಟದಾಗಿತ್ತು. ಅನುಳ ಅಣ್ಣ ತನಗೆ ಬೇಕಾದ ದುಡ್ಡನ್ನು ಪಡೆಯಲು ಅನುಳನ್ನು ಮದುವೆ ಮಾಡಿಸಿದ್ದ. ಆದರೆ ಆ ಮದುವೆಯ ನಂತರ, ಅನುಳ ಗಂಡನಿಗೆ ಅಪಘಾತವಾಗಿ ಅವನು ಮೃತಪಟ್ಟಿದ್ದನು.

​ಪ್ರಿಯಾ ಅನುಳ ಅಣ್ಣನಿಗೆ ಇವಳಿಗೆ ಏಕೆ ಮದುವೆ ಮಾಡಿಸಿದೆ? ಎಂದು ಕೇಳಿದಾಗ, ಅವನು "ಅವನಿಗೆ ಮದುವೆ ಮಾಡಿಸಿದ್ದಕ್ಕೆ ನನ್ನ ತಂಗಿಯ ಜೀವನದಲ್ಲಿ ಕಷ್ಟ ಬಂದಿದೆ. ಅವನಿಗೆ ಯಾವ ಆಸೆ ಇರಲಿಲ್ಲ. ಅವನಿಗೆ ಏನೂ ಗೊತ್ತಿರಲಿಲ್ಲ. ಅವನು ಯಾರಿಗೂ ಬೇಕಿರಲಿಲ್ಲ. ಅವನು ತನ್ನ ಬದುಕಿನಲ್ಲಿ ಬೇರೆಯವರಿಗಿಂತಲೂ ಹೆಚ್ಚು ಕಷ್ಟಪಟ್ಟಿದ್ದನು ಎಂದು ಹೇಳಿದನು.​ಅನುಳ ಕಥೆಯನ್ನು ಕೇಳಿದಾಗ, ಪ್ರಿಯಾ ಆಕೆಯ ಅಣ್ಣನಿಗೆ ನೀನು ಏಕೆ ಇಂತಹ ಕೆಲಸ ಮಾಡಿದ್ದೀಯಾ? ಇವಳ ಬದುಕು ಹಾಳು ಮಾಡಿದೆ" ಎಂದು ಬೈದಿದ್ದಾಳೆ. ಆಗ ಅಣ್ಣ, ನಾನು ಯಾರಿಗೂ ಅನ್ಯಾಯ ಮಾಡಿಲ್ಲ. ಅವನು ನನಗೆ ಮೋಸ ಮಾಡಿದ್ದನು. ನಾನೂ ಕೂಡ ಅವನಿಗೆ ಪಾಠ ಕಲಿಸಬೇಕಿತ್ತು ಎಂದು ಹೇಳಿದನು.​ಅವನಿಗೆ ಆಶ್ಚರ್ಯವಾಯಿತು. ಅನುಳ ಅಣ್ಣ ನಿಜವಾಗಿಯೂ ಒಬ್ಬ ಲೋಫರ್ ಆಗಿದ್ದರೆ, ಅವನು ಅಂತಹ ಕೆಲಸವನ್ನು ಏಕೆ ಮಾಡಿದ್ದನು? ಅನುಳ ಗಂಡನಿಗೆ ಅವನ ಬಗ್ಗೆ ಏನಾದರೂ ಗೊತ್ತಿತ್ತೇ? ಪ್ರಿಯಾ ಅವಳನ್ನು ಕೇಳಿದಾಗ "ಅನುಗೆ ಏನೂ ಗೊತ್ತಿರಲಿಲ್ಲ. ಅವಳು ನಿಜವಾಗಿಯೂ ಒಬ್ಬ ಅಮಾಯಕಳು. ಅವಳಿಗೂ ಎಲ್ಲವೂ ಗೊತ್ತಿಲ್ಲ ಎಂದು ಹೇಳಿದಳು.​ಪ್ರಿಯಾ ಈ ವಿಷಯವನ್ನು ಕೃಷ್ಣನೊಂದಿಗೆ    ಹಂಚಿಕೊಂಡಾಗ, ಅವನ ಮನಸ್ಸಿನಲ್ಲಿ ಅನುಳ ಮೇಲಿನ ನಂಬಿಕೆ ಇನ್ನಷ್ಟು ಗಟ್ಟಿಯಾಗಿತ್ತು. ಆಕೆಯ ಅಣ್ಣ ಲೋಫರ್ ಎಂದು ಅನು ಹೇಳಿದರೂ, ಅವಳ ಗಂಡನ ಸಾವಿನ ಬಗ್ಗೆ ಯಾವುದೇ ವಿಷಯವನ್ನು ಹೇಳಿರಲಿಲ್ಲ.

ಕೃಷ್ಣನು ಅನುವಿನ ಅಣ್ಣನ ಕಥೆಯ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಲು ಪ್ರಯತ್ನಿಸುತ್ತಾನೆ. ಅನುವಿನ ಗಂಡನ ಸಾವಿನ ರಹಸ್ಯ ಏನು? ಕೃಷ್ಣನು ಆ ರಹಸ್ಯವನ್ನು ಹೇಗೆ ಬೇಧಿಸುತ್ತಾನೆ?

                                   ಮುಂದುವರೆಯುತ್ತದೆ