Kannada Quote in Poem by Madhusurya bhat

Poem quotes are very popular on BitesApp with millions of authors writing small inspirational quotes in Kannada daily and inspiring the readers, you can start writing today and fulfill your life of becoming the quotes writer or poem writer.

" ಕಡಲ ತೀರದ ಭಾರ್ಗವ "

ಕೋಟಿ ತಾರೆಗಳ ಮಧ್ಯದಲ್ಲಿ ಕಂಗೊಳಿಸಿದೆ ನೀನು
ನಿನ್ನ ಹುರುಪು, ಧೀಮಂತ ಶಕ್ತಿ ಮರೆತಿಲ್ಲ ನಾನು |

ನೀ ನಡೆದ ಈ ದಾರಿ ಕವಲೊಡೆದು ನಿಂತಿದೆ
ಯಾವ ದಾರಿ ಸರಿ ಎಂದು ಯೋಚಿಸುತ್ತಿರುವೆ ನಾನು |

ಜೀವನ ಎಂದರೆ ಏನೆಂಬುದನ್ನು ಈ ಜಗತ್ತಿಗೆ ತಿಳಿಸಿದೆ ನೀನು
ಅದನ್ನು ಅರ್ಥ ಮಾಡಿಕೊಂಡು ಹೋಗದಿರುವ ಮೂರ್ಖ ನಾನು |

ಆಕಾಶದಲ್ಲಿ ತೇಲುತ್ತಿದ್ದ ಆ ಕವಿತ್ವದ ಪ್ರತಿಭೆ
ಇಂದಿಗೂ ಚಿರಾಮರವಾಗಿ ಉಳಿದಿದೆ ಇಲ್ಲಿ |

ಮತ್ತೆ ಮತ್ತೆ ಹುಟ್ಟಿ ಬರಲಿ ನಿನ್ನಯ ಶೋಭೆ
ಎಂದಿಗೂ ಆರದಿರಲಿ ನಿನ್ನಯ ಜ್ಯೋತಿ |

ನೀನು ಜ್ಞಾನಿ ನೀನು ಯೋಗಿ
ನಿನಗೆ ಸದಾ ವಂದಿಸುವೆ ತಲೆ ಬಾಗಿ |

ನೀ ನುಡಿದ ಸುವಿಚಾರಗಳಿಗೆ ತಲೆದೂಗಿ
ನಿನ್ನ ಮುಂದೆ ನಿಂತೆ ನಾ ಅಜ್ಞಾನಿಯಾಗಿ |

ಭಾರತ ಮಾತೆಯ ಪುಣ್ಯ ನೆಲದಲ್ಲಿ ಹುಟ್ಟಿದೆ ನೀ  ಸುಪುತ್ರನಾಗಿ
ಬೆಳೆದು ನಿಂತೆ ಆ ಕಡಲ ತೀರದಲ್ಲಿ
ನೀನಾದೆ ಕಡಲ ತೀರದ ಭಾರ್ಗವ ಈ ಮಂದಿರದಲ್ಲಿ |

*** *** *** *** *** *** *** ***

       ಮಧುಸೂರ್ಯ ಭಟ್......✍
             ಧನ್ಯವಾದಗಳು.....🙏

Kannada Poem by Madhusurya bhat : 111986339
New bites

The best sellers write on Matrubharti, do you?

Start Writing Now